ಸಂಪೂರ್ಣ ಮನರಂಜನೆ ಜೊತೆಗೆ ಸಾಹಸ ಭರಿತ ಸಿನಿಮಾ ‘ಜಾತ್ರೆ’ ಸಿನಿಮಾಕ್ಕೆ ಸೆನ್ಸಾರ್ ಮಂಡಳಿಯಿಂದ ‘ಯು’ ಅರ್ಹತಾ ಪತ್ರ ಸಿಕ್ಕಿದೆ.
‘ಜಾತ್ರೆ’ ಸಿನಿಮಾದ ಮೂಲಕ ನಟ ರವಿತೇಜ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಚಿತ್ರರಂಗದಲ್ಲಿ ಕಳೆದ ೧೪ವರ್ಷಗಳಿಂದ ಸಕ್ರಿಯರಾಗಿರುವ ರವಿತೇಜ ಈಗ ನಿರ್ದೇಶನ ಮಾಡಿದ ಖುಷಿಯಲ್ಲಿದ್ದಾರೆ.
ಈ ಸಿನೆಮಾದಲ್ಲಿ ಚೇತನ್ ಚಂದ್ರ ಅವರನ್ನು ವಿಭಿನ್ನ ಪಾತ್ರದಲ್ಲಿ ಕಾಣಬಹುದು. ಐಶ್ವರ್ಯ ನಾಗ್ ಚಿತ್ರದ ಕಥಾ ನಾಯಕಿ. ದಿನ ನಿತ್ಯದ ಬದುಕೇ ಒಂದು ‘ಜಾತ್ರೆ’ ಇದ್ದಹಾಗೆ ಎನ್ನುವುದು ಈ ಚಿತ್ರದ ಮುಖ್ಯ ಅಂಶ.
ಯು ಆರ್ ಸಿ ಮೂವೀಸ್ ಅಡಿಯಲ್ಲಿ ಶ್ರೀಕಾಂತ್, ಮೋಹನ ಬಾವಲೆ ಹಾಗೂ ಕೆ ರಾಮಸ್ವಾಮಿ ಚಿತ್ರ ನಿರ್ಮಾಪಕರು. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶಕ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಚಿತ್ರಕ್ಕೆ ಒಂದು ಹಾಡು ಹೇಳಿದ್ದಾರೆ.
ಜಗದೀಶ್ ವಾಲಿ ಅವರ ಛಾಯಾಗ್ರಹಣ, ತ್ರಿಭುವನ್ ನೃತ್ಯ ನಿರ್ದೇಶನ, ಕೆ ಎಂ ಪ್ರಕಾಶ್ ಸಂಕಲನ ಮಾಡಿದ್ದಾರೆ.